ಸೋರೆಕುಂಟೆಯ ಸಿದ್ದರಾಜು ಅವರಿಗೆ ಸಮೃದ್ಧಿ ಟ್ರಸ್ಟ್‌ನಿಂದ ಆರ್ಥಿಕ ನೆರವು: ಬೆಳಗುಂಬ ವೆಂಕಟೇಶ್ ಭೇಟಿ

ತುಮಕೂರು, ಸೆಪ್ಟೆಂಬರ್ 20, 2025: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಸೋರೆಕುಂಟೆ ಗ್ರಾಮದ ಸಿದ್ದರಾಜು ಅವರಿಗೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಟ್ರಸ್ಟ್‌ನ ಅಧ್ಯಕ್ಷರಾದ ಬೆಳಗುಂಬ ವೆಂಕಟೇಶ್ ಅವರು ವೈಯಕ್ತಿಕವಾಗಿ ಸಿದ್ದರಾಜು ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಧನ ಸಹಾಯವನ್ನು ನೀಡಿ ಮಾನವೀಯತೆ ಮೆರೆದರು.

ಕಾರು ಅಪಘಾತದಲ್ಲಿ ಸಿದ್ದರಾಜು ಅವರ ಎಡ ಕಾಲು ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದ ಕೂಡಲೇ ಬೆಳಗುಂಬ ವೆಂಕಟೇಶ್ ಅವರು, ಅವರೊಂದಿಗೆ ಸಮಾಲೋಚಿಸಿ ಆರ್ಥಿಕವಾಗಿ ಸಹಾಯ ಮಾಡಲು ನಿರ್ಧರಿಸಿದರು. ಸಿದ್ದರಾಜು ಅವರಿಗೆ ಧನ ಸಹಾಯ ನೀಡುವ ಮೂಲಕ ಟ್ರಸ್ಟ್ ಕಷ್ಟದಲ್ಲಿರುವವರಿಗೆ ನೆರವಾಗುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

ಈ ಸಂದರ್ಭದಲ್ಲಿ ಮುದೆಗೆರೆ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್, ದೊಡ್ಡೇರಿ ಡಿ.ಕೆ. ಕಾಂತರಾಜ್ ಮತ್ತು ರಾಜಣ್ಣ ಅವರು ಉಪಸ್ಥಿತರಿದ್ದರು. ಸಮೃದ್ಧಿ ಶಿಕ್ಷಣ ಟ್ರಸ್ಟ್‌ನ ಈ ಕಾರ್ಯಕ್ಕೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top